ಕದ್ರಿ ಗೋಪಾಲನಾಥರು 1949ರ ಡಿಸೆಂಬರ್ 6ರಂದು ದಕ್ಷಿಣ ಕನ್ನಡ ಜಿಲ್ಲೆಯ ಪಾಣೆ ಮಂಗಳೂರಿನಲ್ಲಿ ಜನಿಸಿದರು. ತಂದೆ ತನಿಯಪ್ಪನವರು ನಾಗಸ್ವರ ವಿದ್ವಾಂಸರಾಗಿದ್ದರಿಂದ ಸಂಗೀತವೆಂಬುದು ಗೋಪಾಲನಾಥರ ದಿನಚರಿಯಾಗಿತ್ತು. ತಾಯಿ ಗಂಗಮ್ಮನವರು. ಕದ್ರಿ ಗೋಪಾಲನಾಥರು ಬಾಲ್ಯದಿಂದಲೇ ತಂದೆಯವರಿಂದ ನಾಗಸ್ವರ ಶಿಕ್ಷಣವನ್ನು ಪಡೆದರು. ಆದರೆ ಅವರ ಬದುಕಿಗೆ ತೆರೆದದ್ದು ಮತ್ತೊಂದು ಬಾಗಿಲು. ಒಮ್ಮೆ ಅವರು ಮೈಸೂರು ಅರಮನೆಯ ಬ್ಯಾಂಡ್ ಸೆಟ್ನೊಂದಿಗೆ ಸ್ಯಾಕ್ಸಫೋನ್ ವಾದನವನ್ನು ಕೇಳಿ ಆ ವಾದ್ಯದಲ್ಲಿರುವ ವೈವಿದ್ಯತೆಗೆ ಮನಸೋತು ಸ್ಯಾಕ್ಸಫೋನಿನಲ್ಲಿಯೇ ಪ್ರಾವೀಣ್ಯತೆ […]

  ಸಾವಿತ್ರಿ ಚಲನಚಿತ್ರರಂಗ ಕಂಡ ಅತ್ಯದ್ಭುತ ಕಲಾವಿದೆ. ಆಕೆ ಪ್ರತಿಭೆ ಮತ್ತು ಶೋಭೆಗಳ ಅಪೂರ್ವ ಸಂಗಮದಂತಿದ್ದವರು. ನಟಿಯಾಗಿ ಮಾತ್ರವಲ್ಲದೆ ಗಾಯಕಿಯಾಗಿ, ನಿರ್ದೇಶಕಿಯಾಗಿ ಮತ್ತು ನಿರ್ಮಾಪಕಿಯಾಗಿಯೂ ಆಕೆ ಕಾರ್ಯನಿರ್ವಹಿಸಿದ್ದರು. ಮಾಯಾ ಬಜಾರ್ ಅಂತಹ ಪ್ರಸಿದ್ಧ ಚಿತ್ರಗಳಲ್ಲಿನ ಅವರ ಅಭಿನಯ ಮರೆಯಲಾಗದ್ದು. ಸಾವಿತ್ರಿ 1936ರ ಡಿಸೆಂಬರ್ 6ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಚಿರ್ರವೂರು ಎಂಬಲ್ಲಿ ಜನಿಸಿದರು. ತಂದೆ ನಿಸ್ಸಂಕರ ಗುರುವಯ್ಯ. ತಾಯಿ ಸುಭದ್ರಮ್ಮ. ಸಾವಿತ್ರಿಗೆ ಇನ್ನೂ 6 ವರ್ಷ ಇದ್ದಾಗಲೇ ತಂದೆ ನಿಧನರಾದರು. […]

    ಸದಭಿರುಚಿ, ಸೃಜನಶೀಲತೆ, ಜನಪ್ರಿಯತೆ, ಪ್ರಗತಿಪರ ಚಿಂತನೆ, ಪ್ರಯೋಗಶೀಲತೆ ಇವೆಲ್ಲ ಒಟ್ಟಿಗೆ ಮೇಳೈಸಲು ಸಾಧ್ಯವೇ ಎಂಬ ಪ್ರಶ್ನೆಗೆ ನಮ್ಮ ಕನ್ನಡಿಗರ ರೆಡೀಮೇಡ್ ಉತ್ತರವಾಗಿ ಸದಾ ನೆನಪಿಗೆ ಬರುವವರು ಕಿರುತೆರೆಯ ಮೂಲಕ ಮನೆ ಮನೆಗಳ, ಮನಗಳ ಆಪ್ತ ಮಾತಾಗಿರುವ ಟಿ. ಎನ್. ಸೀತಾರಾಂ. ತಳಗವಾರ ನಾರಾಯಣರಾವ್ ಸೀತಾರಾಂ ಅವರು 1948ರ ಡಿಸೆಂಬರ್ 6ರಂದು ಜನಿಸಿದರು. ಇಂದು ಕಿರುತೆರೆಯ ಧಾರಾವಾಹಿಗಳ ನಿರ್ಮಾಣ ಮತ್ತು ನಿರ್ದೇಶನಗಳ ಮೂಲಕ ಜನಪ್ರಿಯರಾಗಿರುವ ಸೀತಾರಾಂ ಪತ್ರಕರ್ತ, ಕತೆಗಾರ, […]

    ಪಿ.ಆರ್.ಆಚಾರ‍್ಯ ಚಿತ್ರಕಲಾವಿದ, ಸಾಹಿತಿ, ನಾಟಕಕಾರ ಹೀಗೆ ಬಹುಮುಖ ಪ್ರತಿಭೆಯಾಗಿ ಹೆಸರಾದವರು. ಕಲಾಲೋಕದಲ್ಲಿ ಪ್ರಸಿದ್ಧಿಯೊಡನೆ ‘ಆರ್ಯ’ ಎಂಬ ಹೆಸರಿನಿಂದ ಅನೇಕ ರೀತಿಯ ಬರಹಗಳನ್ನು ಮಾಡಿದರು. ಪಿ. ಆರ್. ಆಚಾರ‍್ಯ 1945ರ ಡಿಸೆಂಬರ್ 7ರಂದು ಉಡುಪಿಯಲ್ಲಿ ಜನಿಸಿದರು. ತಂದೆ ಪಿ. ವಿಠಲಾಚಾರ‍್ಯ. ತಾಯಿ ರುಕ್ಮಿಣಿ. ಪ್ರಾರಂಭಿಕ ಶಿಕ್ಷಣ ಉಡುಪಿಯ ಬೋರ್ಡ್ ಹೈಸ್ಕೂಲಿನಲ್ಲಿ ನಡೆಯಿತು. ಮುಂದೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ. ಮತ್ತು ಸಂಸ್ಕೃತ ಎಂ.ಎ. ಪದವಿ ಪಡೆದರು. ಹಿಂದಿ ಭಾಷೆಯಲ್ಲಿ […]

  ಪಂಡಿತ್ ಸಂಗಮೇಶ್ವರ ಗುರವ ಕಿರಾಣಾ ಘರಾಣೆಯ ಶ್ರೇಷ್ಠ ಗಾಯಕರಲ್ಲಿ ಒಬ್ಬರು. ಸಂಗಮೇಶ್ವರ ಗುರವ 1931ರ ಡಿಸೆಂಬರ್ 7ರಂದು ಜನಿಸಿದರು. ಅವರು ಇನ್ನೂ ಒಂಬತ್ತನೇ ಕಿರಿಯ ವಯಸ್ಸಿನಲ್ಲಿಯೇ ಶಾಸ್ತ್ರೀಯ ಗಾಯನದತ್ತ ಆಕರ್ಷಿತರಾಗಿ ಕಿರಾಣ ಘರಾಣದ ಮಹತ್ವದ ಸಾಧಕರಾಗಿ ರೂಪುಗೊಂಡರು. ಸಂಗಮೇಶ್ವರ ಅವರ ತಂದೆ ಗಣಪತರಾವ್‌ ಗುರವ ಅವರು ಸಹಾ ಮಹಾನ್ ಸಂಗೀತಗಾರರಾಗಿದ್ದು ಮೂಲತಃ ಬಾಗಲಕೋಟೆ ಜಿಲ್ಲೆಯ ಜಮಖಂಡಿಯವರಾಗಿದ್ದರು. 1947ರಲ್ಲಿ ಜಮಖಂಡಿಯ ರಾಜಮನೆತನ ದೇಶದ ಪ್ರಜಾಪ್ರಭುತ್ವಕ್ಕೆ ಒಂದುಗೂಡಿಕೊಂಡಾಗ, ಸಂಗೀತಕ್ಕೆ ರಾಜಾಶ್ರಯ ತಪ್ಪಿ […]

    ಅಮೆರಿಕದವರಾದರೂ ಕರ್ನಾಟಕ ಸಂಗೀತವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿ, ಕಲಿತು ಅದರಲ್ಲಿ ಉತ್ತುಂಗಕ್ಕೆ ಏರಿ ಅಷ್ಟೇ ಬೇಗ ಈ ಲೋಕದಿಂದ ಕಣ್ಮರೆಯಾದವರು ಜಾನ್ ಬಿ ಹಿಗ್ಗಿನ್ಸ್. ಹೀಗೆ ಸಾಧನೆ ಮಾಡಿದ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತದ ದಿಗ್ಗಜರುಗಳಿಂದಲೇ ಹಿಗ್ಗಿನ್ಸ್ ಭಾಗವತರ್ ಎಂಬ ಸಂಬೋಧನೆಗೆ ಪಾತ್ರರಾದವರು. ಇಂದು ಈ ಮಹಾನುಭಾವರ ಸಂಸ್ಮರಣೆ ದಿನ. ಜಾನ್ ಬೋರ್ತ್ವಿಕ್ ಹಿಗ್ಗಿನ್ಸ್ 1939ರ ಸೆಪ್ಟೆಂಬರ್ 18ರಂದು ಅಮೆರಿಕದ ಮೆಸಾಚುಸೆಟ್ಸ್‌ ಪ್ರದೇಶದ ಆ್ಯಾಂಡೋವರ್ ಎಂಬಲ್ಲಿ ಜನಿಸಿದರು.. […]

    ತಾಯಿ ತಿಮ್ಮಕ್ಕ, ಬಾಯಿಮಾತಲ್ಲ ನಿನ್ನ ದಿವ್ಯಕಾಯಕ. ನೂರುಗಟ್ಟಲೆ ಸಸಿಗಳನ್ನು ನೆಟ್ಟಿದ್ದೀಯೇ, ದೂರದಿಂದ ನೀರು ಹೊತ್ತು ತಂದಿದ್ದೀಯೆ, ಕೈಯಾರೆ ಎರೆದು ಬೆಳೆಸಿದ್ದೀಯೆ, ಬೆವರ ಹನಿ ಬೆರೆಸಿದ್ದೀಯೆ, ನೀ ನೆಟ್ಟ ಮರಗಳಲ್ಲಿ ಹಕ್ಕಿಗಳು ಗೂಡು ಕಟ್ಟಿವೆ ಮಕ್ಕಳು ಜೋಕಾಲಿ ಆಡಿದ್ದಾರೆ, ಬಿಸಿಲ ಕೋಲು ರಂಗೋಲಿ ರಚಿಸಿದೆ, ದಾರಿಹೋಕರು ದಣಿವಾರಿಸಿಕೊಂಡಿದ್ದಾರೆ, ಬುತ್ತಿ ಬಿಚ್ಚಿ ಉಂಡಿದ್ದಾರೆ, ನೀರು ನೆರಳು ಪಡೆದಿದ್ದಾರೆ, ಕಾಲು ಚಾಚಿ ಮಲಗಿದ್ದಾರೆ, ಕಣ್ಣು ಮುಚ್ಚಿ ಕಮ್ಮನೆಯ ಕನಸು ಕಂಡಿದ್ದಾರೆ. ನಿನ್ನ […]

  ಭಾರತೀಯ ಮೂಲದ ಗೀತಾ ಗೋಪಿನಾಥ್ ಪ್ರಸಕ್ತದಲ್ಲಿನ ಅಂತರರಾಷ್ಟ್ರೀಯ ಹಣಕಾಸು ನಿಧಿ (International Monetary Fund) ಸಂಸ್ಥೆಯ ಡೆಪ್ಯೂಟಿ ಡೈರೆಕ್ಟರ್. 2019-2022 ಅವಧಿಯಲ್ಲಿ ಅವರು ಅಲ್ಲಿನ ಪ್ರಧಾನ ಆರ್ಥಿಕ ತಜ್ಞೆಯಾಗಿದ್ದರು. ಗೀತಾ ಗೋಪಿನಾಥ್ ನಮ್ಮ ಮೈಸೂರಿನ ಹುಡುಗಿ. ಗೀತಾ ಗೋಪಿನಾಥ್ 1971ರ ಡಿಸೆಂಬರ್ 8ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ಟಿ.ವಿ. ಗೋಪೀನಾಥ್. ತಾಯಿ ವಿಜಯಲಕ್ಷ್ಮಿ. ಮೈಸೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮಾಡಿದ ಗೀತಾ ದೆಹಲಿ ವಿಶ್ವವಿದ್ಯಾಲಯದಲ್ಲಿ ಬಿಎ ಪದವಿ, ದೆಹಲಿ ಸ್ಕೂಲ್ […]

  ಧರ್ಮೇಂದ್ರ ಚಲನಚಿತ್ರರಂಗದಲ್ಲಿ ಸುರದ್ರೂಪ, ಪ್ರತಿಭೆ, ಯಶಸ್ಸು ಎಲ್ಲವೂ ಒಂದೆಡೆ ಸಂಭವಿಸಿದ ನಟ. ಜೊತೆಗೆ ಮದುವೆಯಾಗಿ ಹಲವು ಮಕ್ಕಳಿದ್ದರೂ ಕನಸಿನ ಕನ್ಯೆ ಹೇಮಾಮಾಲಿನಿಯೂ ಈತನಿಗೇ ಹೂಮಾಲೆ ಹಾಕಿದರು. ನೂರಕ್ಕೂ ಹೆಚ್ಚು ಯಶಸ್ವೀ ಚಿತ್ರಗಳಲ್ಲಿ ನಟಿಸಿದ ವಿರಳ ಯಶಸ್ವೀ ನಟರೀತ. ಧರ್ಮೇಂದ್ರ ಪಂಜಾಬಿನ ಲುಧಿಯಾನ ಜಿಲ್ಲೆಯ ನಸ್ರಾಲಿ ಎಂಬ ಹಳ್ಳಿಯಲ್ಲಿ 1935ರ ಡಿಸೆಂಬರ್ 8ರಂದು ಜನಿಸಿದರು. ತಂದೆ ಕೇವಲ್ ಕಿಶನ್ ಸಿಂಗ್ ಡಿಯೋಲ್ ಶಾಲಾ ಮುಖ್ಯೋಪಾಧ್ಯಾಯರಾಗಿದ್ದರು. ತಾಯಿ ಸತ್ವಂತ್ ಕೌರ್. ಲುಧಿಯಾನದ […]

  ಶರ್ಮಿಳಾ ಠಾಗೂರ್ 1944ರ ಡಿಸೆಂಬರ್ 8ರಂದು ಹೈದರಾಬಾದಿನಲ್ಲಿ ಜನಿಸಿದರು. ಅವರ ತಂದೆ ಗೀತೀಂದ್ರನಾಥ ಠಾಗೂರರು ಬ್ರಿಟಿಷ್ ಇಂಡಿಯಾ ಕಾರ್ಪೊರೇಷನ್ನಿನ ಜನರಲ್ ಮ್ಯಾನೇಜರ್ ಹುದ್ದೆಯಲ್ಲಿದ್ದರು. ತಾಯಿ ಇರಾ ಠಾಗೂರ್. ತಂದೆ ಮತ್ತು ತಾಯಿ ಎರಡೂ ಕುಟುಂಬಕ್ಕೂ ನೊಬೆಲ್ ಪುರಸ್ಕೃತ ಕವಿ ರಬೀಂದ್ರನಾಥ್ ಠಾಗೂರರು ದೂರ ಸಂಬಂಧಿಗಳಾಗಿದ್ದರು. ಶರ್ಮಿಳಾ ಅವರು ಶಾಲೆಯಲ್ಲಿ ಓದುತ್ತಿದ್ದಾಗ 13ನೇ ವಯಸ್ಸಿನಲ್ಲಿ ಇರುವಾಗಲೇ ಸಿನಿಮಾ ಕ್ಷೇತ್ರಕ್ಕೆ ಪ್ರವೇಶ ದೊರಕಿ ಅವರ ಓದು ನಿಲುಗಡೆ ಆಯ್ತು. 1959ರಲ್ಲಿ ಸತ್ಯಜಿತ್ […]

Advertisement

Wordpress Social Share Plugin powered by Ultimatelysocial